Latest Updates

ಎಲ್ಲರೂ ವಿಮಾನ ಹತ್ತುವಂತೆ ಮಾಡಿದ ಮೋದಿಯ ‘ಉಡಾನ್’!

ಈಗೊಂದು ಹತ್ತು ವರ್ಷಗಳ ಹಿಂದಿನವರೆಗೂ ಸ್ಥಿತಿ ಹೇಗಿತ್ತೆಂದರೆ, ಆಕಾಶದಲ್ಲೆಲ್ಲೋ ವಿಮಾನದ ಶಬ್ದವಾದರೆ ಓಡಿ ಹೋಗಿ, ಮುಖ ಮೇಲೆ ಮಾಡಿ, ಕೈಯ್ಯನ್ನು ಹಣೆಗಿಟ್ಟುಕೊಂಡು, ಕಣ್ಣರಳಿಸಿ ವಿಮಾನ ನೋಡಬೇಕಿತ್ತು. ಜೊತೆಗೆ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಬೇಕಿತ್ತು. ಸಾಮಾನ್ಯರೆಲ್ಲರಿಗೂ ವಿಮಾನವನ್ನು ಪ್ರತ್ಯಕ್ಷವಾಗಿ ಕಾಣುವ ಏಕೈಕ ಸಂದರ್ಭ ಅದಾಗಿತ್ತು. ವಿಮಾನ ಹತ್ತುವುದಿರಲಿ, ಏರ್ಪೋರ್ಟ್ ಹೇಗಿರುತ್ತದೆ ಎಂದು ನೋಡುವುದಕ್ಕೂ ಹತ್ತಿರದಲ್ಲೆಲ್ಲೂ ಏರ್ಪೋರ್ಟ್ ಇರಲಿಲ್ಲ. ವಿಮಾನ ಹತ್ತಿದವನನ್ನು ಯಾವುದೋ ದೊಡ್ದ ಸಾಧನೆ ಮಾಡಿದವನ ರೀತಿಯಲ್ಲಿ ಜನ ನೋಡುವ ಒಂದು ಕಾಲವಿತ್ತು. ಸ್ವಾತಂತ್ರ್ಯ ಬಂದು ಅರವತ್ತೇಳು ವರ್ಷಗಳವರೆಗೂ ಭಾರತದಲ್ಲಿ ಇದೇ ಸ್ಥಿತಿಯಿತ್ತು. ಎಷ್ಟೇ ದೂರವಾದರೂ ಸರಿ, ಜನಸಾಮಾನ್ಯರು…

Read More icon

ರಸ್ತೆ-ರೈಲು ಮೋದಿ ಸಾಧನೆಯ ಸಾಲು

ಚಿನ್ನದ ಬದಲಿಗೆ ಚಿನ್ನದಂತಹ ರಸ್ತೆಗಳು. ಪ್ರಯಾಣ, ಪ್ರಯಾಸ ಆಗದಂತಹ ರಸ್ತೆಗಳು. ಚಲಿಸುವ ಶೌಚಾಲಯದಿಂದ ಫೈವ್ ಸ್ಟಾರ್ ಹೋಟೆಲ್ ಅನುಭವ ತರುವ ರೈಲು ಭೋಗಿಗಳು. ವಿದೇಶಿ ವಿಮಾನ ನಿಲ್ದಾಣಗಳನ್ನೂ ಮೀರಿಸುವ ರೈಲ್ವೇ ಟರ್ಮಿನಲ್ ಗಳು. ಹೀಗೂ ಮಾಡಬಹುದಾ ಎನ್ನುವಂತಹ ಸಿವಿಲ್ ಇಂಜಿನಿಯರಿಂಗ್ ತಾಂತ್ರಿಕತೆಯ ಬ್ರಿಡ್ಜ್ ಗಳು, ಟನಲ್ ಗಳು. ಇವೆಲ್ಲದರ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ದಕ್ಷ ಸಚಿವರು ಆ ದಕ್ಷ ಸಚಿವರನ್ನ ಗುರುತಿಸಿ ಸರಿಯಾದ ಜಾಗದಲ್ಲಿ ಕೂರಿಸುವುದಕ್ಕೆ ಒಬ್ಬ ಪ್ರಧಾನಿ. ದೇಶದ ಅಭಿವೃದ್ದಿಗೆ ಪ್ರಮುಖ ಪಾತ್ರವಹಿಸುವ ಭಾರತದ ನರನಾಡಿಯಾಗಿರುವ ರಸ್ತೆ, ರೈಲು ಮಾರ್ಗಗಳ ಮೂಲ ಸೌಕರ್ಯದ ಬಗ್ಗೆ…

Read More icon

ಹ್ಯಾಪಿ ಬರ್ತಡೆ ಮೋದಿಜಿ

ಆದರಣೀಯ ಮೋದಿಜಿ, ಮೊದಲನೆಯದಾಗಿ G20 ಸಮಾವೇಶದ ಮೂಲಕ ಭಾರತದ ಗೌರವವನ್ನು ವಿಶ್ವದ ವೇದಿಕೆಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದಕ್ಕೆ ಎಲ್ಲ ದೇಶವಾಸಿಗಳ ಪರವಾಗಿ ಧನ್ಯವಾದಗಳು. ಇದೇ ಸೆಪ್ಟೆಂಬರ್17 ಕ್ಕೆ ಎಪ್ಪತ್ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದೀರಿ. ಕಳೆದ ಹತ್ತು ವರ್ಷಗಳಿಂದ ವಿಶ್ರಾಂತಿಯನ್ನೇ ತೆಗೆದುಕೊಳ್ಳದೇ ದಿನಕ್ಕೆ 18 ಗಂಟೆಗಳ ಕಾಲ ನಮಗಾಗಿ ಕೆಲಸ ಮಾಡಿದ್ದೀರಿ. ಬಹುಶಃ ಇದೇ ಕಾರಣಕ್ಕಾಗಿ ಯಾವ ರಾಜಕಾರಣಿಯೂ ಕೇಳದಷ್ಟು ಬೈಗುಳಗಳನ್ನು ರಾಜಕೀಯ ವಿರೋಧಿಗಳಿಂದ ಕೇಳಿದ್ದೀರಿ ಮತ್ತು ಬೈಗುಳದ ಸಾವಿರಪಟ್ಟು ಹೆಚ್ಚು ಪ್ರೀತಿಯನ್ನು ಜನಸಾಮಾನ್ಯರಿಂದ ಪಡೆದಿದ್ದೀರಿ. ರಾಜಕೀಯದ ಗಂಧಗಾಳಿಯೂ ಕೇಳಿರದ ಮಕ್ಕಳೂ ಟಿವಿಯ ಪರದೆಯ ಮೇಲೆ ನಿಮ್ಮನ್ನು…

Read More icon

ಸಿದ್ದರಾಮಯ್ಯನವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದೆ ನಮೋಬ್ರಿಗೇಡ್!

ತಮ್ಮ ಖಾತೆಯ ಟ್ವೀಟ್‌ನ ಮೂಲಕ ಆದರಣೀಯ ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ನೀವೊಂದಷ್ಟು ಪ್ರಶ್ನೆಗಳನ್ನು ಕೇಳಿರುವಿರಿ. ನಿಮ್ಮ ಪ್ರಶ್ನೆಗೆ ಉತ್ತರ ಕೊಡಲಾಗದೇ ಅವರು ಓಡಿಹೋಗುತ್ತಾರೆ ಎಂದೂ ಅದರಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದೀರಿ. ಮೋದಿಯವರ ಸಾಧನೆ ಕಣ್ಣೆದುರು ನಿಚ್ಚಳವಾಗಿರುವಾಗ ಅದನ್ನು ಕಾಣಲಾಗದ ನಮ್ಮ ಕುರುಡತನಕ್ಕೆ ಅನುಕಂಪವಿರಬೇಕೇ ಹೊರತು ಉತ್ತರಿಸದಿರುವ ಮೋದಿಯವರ ಕುರಿತಂತೆ ಅಲ್ಲ. ನೀವು ಕೇಳಿರುವ ಅತ್ಯಂತ ಬಾಲಿಶವಾದ ಪ್ರಶ್ನೆಗಳಿಗೆ ಸ್ವಲ್ಪಮಟ್ಟಿಗೆ ಪ್ರಜ್ಞೆಯಿರುವ ಯಾವನು ಬೇಕಾದರೂ ಉತ್ತರಿಸಬಲ್ಲ. ಮೋದಿ ಕಣ್ಣಿಗೆ ರಾಚುವಂತೆ ವಿಕಾಸದ ಹಬ್ಬ ನಡೆಸಿಬಿಟ್ಟಿದ್ದಾರೆ. ಅದರ ಫಲಾನುಭವಿ ನೀವೂ ಕೂಡ ಆಗಿದ್ದೀರಿ ಎನ್ನುವುದನ್ನು ಮರೆಯಬೇಡಿ. ನಿಮ್ಮ ಮೊದಲ…

Read More icon

ದೇಶದ ಆರ್ಥಿಕತೆಯನ್ನು‌ ಹದಗೆಡಿಸುವ ಉಚಿತ ಕೊಡುಗೆಗಳು!

ಆರ್ಥಿಕತೆ ಅನ್ನುವುದೊಂದು ಚಕ್ರೀಯ ಚಲನೆ. ಸರ್ಕಾರ ತೆರಿಗೆ ಇನ್ನಿತರೆ ಮೂಲಗಳಿಂದ ಸಂಗ್ರಹಿಸಿದ ದುಡ್ಡನ್ನು ವಾಪಾಸು ಸಾರ್ವಜನಿಕರ ಉಪಯೋಗಕ್ಕೆ ಖರ್ಚು ಮಾಡುತ್ತದೆ. ಇದರಲ್ಲಿ ಅಭಿವೃದ್ದಿ ಕಾರ್ಯಗಳು, ಮೂಲಭೂತ ಸೌಕರ್ಯಗಳ ಅಭಿವೃದ್ದಿಪಡಿಸುವಿಕೆ ಹೀಗೆ ಹತ್ತಾರು ಕೆಲಸಗಳು ಒಳಗೊಳ್ಳುತ್ತವೆ. ರಕ್ಷಣಾ ವಿಭಾಗದಂಥ ಕೆಲವು ಇಲಾಖೆಗಳಿಗೆ ಸರ್ಕಾರ ಯಾವುದೇ ಆದಾಯವನ್ನು ನಿರೀಕ್ಷಿಸದೇ ಖರ್ಚು ಮಾಡಬೇಕಾಗುತ್ತದೆ. ಇದರ ಜೊತೆಗೆ ದೇಶದ ದೀನ-ದಲಿತರನ್ನು ಸಮಾಜದ ಮುಖ್ಯವಾಹಿನಿ ಸೇರಿಸಲೋಸುಗ ಕೆಲವೊಂದು ರಿಯಾಯಿತಿಗಳನ್ನು ಒದಗಿಸುವುದು ವಾಡಿಕೆ. ಈ ಎಲ್ಲವನ್ನೂ ಆಧರಿಸಿ ಸರ್ಕಾರವೊಂದು ಬಜೆಟ್ ಮಂಡನೆ ಮಾಡುತ್ತೆ. ಯಾವಾಗ ಖರ್ಚು ಆದಾಯಕ್ಕಿಂತ ಜಾಸ್ತಿಯಾಗುತ್ತೋ ಆಗ ಅದೊಂದು ಡಿಫಿಸಿಟ್…

Read More icon

ಹಿಂದೂ ಪುನರುತ್ಥಾನದಲ್ಲಿ ಮೋದಿಜಿಯವರ ಪಾತ್ರ

ದೇಶ, ಅದಕ್ಕೊಂದೇ ಧರ್ಮ, ಅದನ್ನಾಳಲು ಒಂದು ಸಂವಿಧಾನ ಹಾಗೂ ಕಾನೂನು, ಜೊತೆಗೆ ಆ ದೇಶದಲ್ಲಿ ಒಂದೇ ದೇವರು, ಧರ್ಮವನ್ನು ಅನುಸರಿಸುವ ಜನ. ಇಷ್ಟೇ ಆಗಿದ್ದರೆ ಆ ದೇಶ ಹೇಗಿರುತ್ತದೆ? ಬಹುಶಃ ಜಪಾನ್ ಥರ ಇರುತ್ತದೆ. ಆದರೆ ಸಾವಿರಾರು ವರ್ಷಗಳ ಘಾಸಿಗೊಂಡ ಇತಿಹಾಸ, ವಿದೇಶಿಗರ ಆಕ್ರಮಣ, ವಿದೇಶೀ ಆಡಳಿತ, ಸ್ವಾತಂತ್ರ್ಯ ಬಂದರೂ ಮರೆಯಾದ ಸ್ವಂತಿಕೆ, ಹತ್ತಾರು ಧರ್ಮ, ಸಮುದಾಯಗಳು ಇವೆಲ್ಲ ಸೇರಿದರೆ ಆ ದೇಶ ಭಾರತದಂತಿರುತ್ತದೆ. ಕಳೆದ 65 ವರ್ಷಗಳ ಕಾಲ ಭಾರತದ ಧಾರ್ಮಿಕ ನಂಬಿಕೆಗಳು, ಜನರ ಧರ್ಮದ‌ ಅರಿವು ಹಾಗೂ ಧಾರ್ಮಿಕ ಪ್ರಜ್ಞೆಯನ್ನು ಗಣನೆಗೆ…

Read More icon

ಚಿನ್ನದ ರಸ್ತೆ ಎಂದು ಹಪಹಪಿಸುತ್ತಿದ್ದವರಿಗೆ ಮೋದಿ ಉಡುಗೊರೆ!

ಕಾಂಗ್ರೆಸ್ಸಿನ ನಿರ್ಲಜ್ಜತನವನ್ನು ಮೆಚ್ಚಲೇಬೇಕು. 1951ರವರೆಗೆ ಭಾರತದಲ್ಲಿ ಇದ್ದ ಒಟ್ಟು ರಾಷ್ಟ್ರೀಯ ಹೆದ್ದಾರಿಯ ಪ್ರಮಾಣ 22,200 ಕಿ.ಮೀನಷ್ಟು. 1997ರ ವೇಳೆಗೆ ಅಂದರೆ, ಸುಮಾರು 46 ವರ್ಷಗಳ ನಂತರ ಇದು 34,298 ಕಿ.ಮೀಗಳಿಗೇರಿತು. ಈ ಐದು ದಶಕಗಳ ಅವಧಿಯಲ್ಲಿ ಕಾಂಗ್ರೆಸ್ಸು ಕೂಡಿಸಿದ ರಾಷ್ಟ್ರೀಯ ಹೆದ್ದಾರಿಯ ಪ್ರಮಾಣ 12,000 ಕಿ.ಮೀಗಳಷ್ಟು ಮಾತ್ರ. ಆದರೆ ವಾಜಪೇಯಿಯವರು ತಮ್ಮ ಅಧಿಕಾರಾವಧಿಯ ಏಳೇ ವರ್ಷಗಳಲ್ಲಿ 31,000 ಕಿ.ಮೀಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಯನ್ನು ಭಾರತದ ಬುಟ್ಟಿಗೆ ಹಾಕಿದರು. ಅದ್ಭುತವಾದ ಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸಿ, ಆದರ್ಶ ಆಡಳಿತದ ನಮೂನೆಯನ್ನು ಹಾಕಿಕೊಟ್ಟಿದ್ದ ವಾಜಪೇಯಿಯವರನ್ನು ಅನುಸರಿಸಿದ್ದರೂ ಕಾಂಗ್ರೆಸ್ಸು ಇಂದು…

Read More icon

ಮಣಿಪುರದ ಅಶಾಂತಿಯನ್ನು ಕಂಡು ಮೋದಿ ಸರ್ಕಾರ ಕೈಕಟ್ಟಿ ಕುಳಿತಿದೆಯೇ?

ಮೈತೇಯಿ ಪಂಗಡವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಸುಮಾರು ಎರಡು ದಶಕಗಳಷ್ಟು ಹಳೆಯದು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ ವಿ ಮುರಳೀಧರನ್ ಅವರನ್ನೊಳಗೊಂಡ ಮಣಿಪುರದ ಹೈಕೋರ್ಟ್ ನ ಏಕಸದಸ್ಯ ಪೀಠವು ಏಪ್ರಿಲ್ 20, 2023 ರಂದು ಪರಿಶಿಷ್ಟ ಜಾತಿಯ ಪಟ್ಟಿಗೆ ಮೈತೇಯಿಗಳನ್ನು ಸೇರಿಸಲು ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಶಿಫಾರಸು ಕಳುಹಿಸಲು ಸೂಚಿಸಿತು. ನ್ಯಾಯಾಂಗದ ಈ ಆದೇಶವನ್ನು ಕಂಡೊಡನೆ ಮಣಿಪುರದಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದ ಅವಕಾಶವಾದಿ ಇವ್ಯಾಂಜಲಿಸ್ಟ್ ಗಳು, ಚೀನಾ, ಮಾಯನ್ಮಾರ್ ಪ್ರೇರಿತ ಭಯೋತ್ಪಾದಕರು, ಮಾದಕ ದ್ರವ್ಯ ಧಂಧೆಕೋರರು, ಅಕ್ರಮ ಅಫೀಮು ಬೆಳೆಗಾರರಿಗೆ ಮಣಿಪುರದಲ್ಲಿ…

Read More icon

ಸೈಲೆಂಟಾಗಿ ಮೋಸ ಮಾಡುತ್ತಿದ್ದವರನ್ನು ಮಟ್ಟಹಾಕಲು ಕೃತಕ ಬುದ್ಧಿಮತ್ತೆ ಬಳಸಿಕೊಂಡ ಕೇಂದ್ರ ಸರ್ಕಾರ!

ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಗಳನ್ನು ಉಪಯೋಗಿಸಿಕೊಂಡು ಪ್ರಾರಂಭಿಸಿದ್ದ ವಂಚನಾ-ನಿಗ್ರಹ ಕಾರ್ಯಸೂಚಿಯಿಂದ 9.5 ಕೋಟಿ ರೂಪಾಯಿಯಷ್ಟು ದಂಡವನ್ನು ಪಡೆದುಕೊಳ್ಳಲಾಗಿದೆ.ಈ ಕಾರ್ಯಸೂಚಿ ಜಗತ್ತಿನ ಅತ್ಯಂತ ದೊಡ್ಡ, ಸರ್ಕಾರವೇ ನಡೆಸುತ್ತಿರುವ ವಿಮಾ ಯೋಜನೆ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಇದರ ಆಧಾರದ ಮೇಲೆ ಪಡೆದ ಮಾಹಿತಿಯಿಂದ 5.3 ಲಕ್ಷ ಆಯುಷ್ಮಾನ್ ಕಾರ್ಡುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು 210 ಆಸ್ಪತ್ರೆಗಳ ದಾಖಲಾತಿಯನ್ನು ರದ್ದುಗೊಳಿಸಲಾಗಿದೆ. ಈ AI (ಕೃತಕ ಬುದ್ಧಿಮತ್ತೆ) ಕಾರ್ಯಸೂಚಿಯನ್ನು ಬಳಸಲು ಪ್ರಾರಂಭಿಸಿದಾಗಿನಿಂದ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ನೇಮಕಾತಿಗೊಂಡಿದ್ದ ಆಸ್ಪತ್ರೆಗಳಲ್ಲಿ 0.18 ಪ್ರತಿಶತದಷ್ಟು ಮೋಸ…

Read More icon
1 2