370 ತೆಗೆದ ಮೋದಿಗೆ 370 ಸೀಟು ಕೊಡದಿದ್ದರೆ ಹೇಗೆ?!
ಸಮಾಜದಲ್ಲಿ ಜಾಗೃತಿ ಮೂಡಿಸಲು ಮತ್ತು ಆಖ್ಯಾಯಿಕೆಯನ್ನು(Narrative) ರೂಪಿಸಲು ಸಿನಿಮಾ ಅತ್ಯಂತ ಜನಪ್ರಿಯ ಹಾಗೂ ಪ್ರಬಲ ಮಾಧ್ಯಮ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಎಡಪಂಥೀಯರು. ತಮ್ಮ ಸಿದ್ಧಾಂತವನ್ನು ಸದ್ದಿಲ್ಲದೆ ಸಿನಿಮಾ, ನಾಟಕಗಳ ಮೂಲಕ ಜನರ ತಲೆಗೆ ತುಂಬುವಲ್ಲಿ ಸಫಲರಾಗಿದ್ದು ಇದರ ಮೂಲಕವೇ. ಅದರಲ್ಲೂ ಬಾಲಿವುಡ್ ಅಂತೂ ಭಾರತ ವಿರೋಧಿತನದ ಬೌದ್ಧಿಕ ಭಯೋತ್ಪಾದನೆಯ ಭದ್ರಕೋಟೆಯಾಗಿ ರೂಪುಗೊಂಡಿತು. ಭಾರತವನ್ನು ಕೀಳಾಗಿ ಬಿಂಬಿಸುವುದು, ಹಿಂದೂಗಳನ್ನು ಅವಮಾನಿಸುವುದು, ಭಯೋತ್ಪಾದಕರನ್ನು ಅಮಾಯಕರಂತೆ ಚಿತ್ರಿಸುವುದೇ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಇರುವ ಏಕಮಾತ್ರ ಮಾನದಂಡವಾಗಿತ್ತು. ಆದರೆ 2014ರ ನಂತರ ಮೋದಿ ನೇತೃತ್ವದ ರಾಷ್ಟ್ರವಾದಿ ಸರ್ಕಾರ ದೇಶದ ವಾತಾವರಣ ಬದಲಾಯಿತು.…