Latest Updates

370 ತೆಗೆದ ಮೋದಿಗೆ 370 ಸೀಟು ಕೊಡದಿದ್ದರೆ ಹೇಗೆ?!

ಸಮಾಜದಲ್ಲಿ ಜಾಗೃತಿ ಮೂಡಿಸಲು ಮತ್ತು ಆಖ್ಯಾಯಿಕೆಯನ್ನು(Narrative) ರೂಪಿಸಲು ಸಿನಿಮಾ ಅತ್ಯಂತ ಜನಪ್ರಿಯ ಹಾಗೂ ಪ್ರಬಲ ಮಾಧ್ಯಮ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಎಡಪಂಥೀಯರು. ತಮ್ಮ ಸಿದ್ಧಾಂತವನ್ನು ಸದ್ದಿಲ್ಲದೆ ಸಿನಿಮಾ, ನಾಟಕಗಳ ಮೂಲಕ ಜನರ ತಲೆಗೆ ತುಂಬುವಲ್ಲಿ ಸಫಲರಾಗಿದ್ದು ಇದರ ಮೂಲಕವೇ. ಅದರಲ್ಲೂ ಬಾಲಿವುಡ್ ಅಂತೂ ಭಾರತ ವಿರೋಧಿತನದ ಬೌದ್ಧಿಕ ಭಯೋತ್ಪಾದನೆಯ ಭದ್ರಕೋಟೆಯಾಗಿ ರೂಪುಗೊಂಡಿತು. ಭಾರತವನ್ನು ಕೀಳಾಗಿ ಬಿಂಬಿಸುವುದು, ಹಿಂದೂಗಳನ್ನು ಅವಮಾನಿಸುವುದು, ಭಯೋತ್ಪಾದಕರನ್ನು ಅಮಾಯಕರಂತೆ ಚಿತ್ರಿಸುವುದೇ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಇರುವ ಏಕಮಾತ್ರ ಮಾನದಂಡವಾಗಿತ್ತು‌. ಆದರೆ 2014ರ ನಂತರ ಮೋದಿ‌ ನೇತೃತ್ವದ ರಾಷ್ಟ್ರವಾದಿ ಸರ್ಕಾರ ದೇಶದ ವಾತಾವರಣ ಬದಲಾಯಿತು.…

Read More icon

ಆಯೆ ಗಾ ತೊ, ಮೋದಿ ಹೀ !

"ಭಾರತವೀಗ ಸಣ್ಣ ಕನಸನ್ನು ಕಾಣುವಂತಿಲ್ಲ, ಸಣ್ಣ ಸಂಕಲ್ಪವನ್ನೂ ಮಾಡುವಂತಿಲ್ಲ. ಇನ್ನೇನಿದ್ದರೂ ಕನಸೂ ದೊಡ್ಡದಾಗಿರುತ್ತದೆ, ಸಂಕಲ್ಪವೂ ವಿರಾಟ್ ಆಗಿರುತ್ತದೆ. ನಾವು ಭಾರತವನ್ನು ವಿಕಸಿತಗೊಳಿಸಬೇಕು ಎನ್ನುವುದು ನಮ್ಮ ಕನಸೂ ಹೌದು ಮತ್ತು ನಮ್ಮೆಲ್ಲರ ಸಂಕಲ್ಪವೂ ಹೌದು. ಮುಂದಿನ ಐದು ವರ್ಷ ಭಾರತ ಮೊದಲಿಗಿಂತಲೂ ಹೆಚ್ಚು ವೇಗವಾಗಿ ಕಾರ್ಯ ನಿರ್ವಹಿಸಬೇಕು. ಮುಂದಿನ ಐದು ವರ್ಷ ವಿಕಸಿತ ಭಾರತದತ್ತ ನಾವೆಲ್ಲ ದಾಪುಗಾಲಿಡಬೇಕು. ದೇಶದ ಕೋಟಿ ಕೋಟಿ ಯುವಕರು, ಮಹಿಳೆಯರು, ಬಡವರ ಕನಸೇ ಮೋದಿಯ ಸಂಕಲ್ಪ", ಇವು ಸ್ವತಃ ಪ್ರಧಾನಮಂತ್ರಿ ನರೇಂದ್ರಮೋದಿಯರ ಮಾತುಗಳು. ಇತ್ತೀಚೆಗಷ್ಟೇ ದೆಹಲಿಯ ಭಾರತ ಮಂಟಪಂನಲ್ಲಿ ಬಿಜೆಪಿಯ ಕಾರ್ಯಕರ್ತರಿಗೆಂದೇ…

Read More icon

ಮೋದಿ 3.0 Vs ಖಲಿಸ್ಥಾನಿ 2.0 !

"ರಾಮ ಮಂದಿರದ ಉದ್ಘಾಟನೆಯ ಬಳಿಕ ಮೋದಿಯ ಜನಪ್ರಿಯತೆಯ ಗ್ರಾಫ್ ಮತ್ತಷ್ಟು ಏರಿದೆ. ಚುನಾವಣೆಗೆ ಇನ್ನೂ ಕೆಲವೇ ದಿನ ಇದೆ. ಹೇಗಾದರೂ ಮಾಡಿ ಮೋದಿಯ ಜನಪ್ರಿಯತೆಯನ್ನು ಕುಗ್ಗಿಸಬೇಕು, ಅದಕ್ಕೆ ಈ ಆಂದೋಲನ ಒಳ್ಳೆಯ ಅವಕಾಶ" - ಈ ಮಾತು ಹೇಳಿದ್ದು ರೈತ ಮುಖಂಡ ಜಗಜಿತ್ ಸಿಂಗ್ ಎಂಬಾತ. ಮತೊಬ್ಬ ನಾಯಕ "ಕಳೆದ ಸಾರಿ ಹೇಗೋ ಬಚಾವ್ ಆದ, ಈ ಬಾರಿ ಮೋದಿ ಪಂಜಾಬಿಗೆ ಬಂದರೆ ಖಂಡಿತ ಆತ ಜೀವಂತವಾಗಿ ಹೋಗುವುದಿಲ್ಲ" ಎಂದು ಬೆದರಿಕೆ ಹಾಕಿದ್ದಾನೆ. ಇವೆಲ್ಲವನ್ನೂ ನೋಡಿದಾಗ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ರೈತರಿಗಾಗಿ ನಡೆಸುತ್ತಿರುವ ಆಂದೋಲನವಲ್ಲ,…

Read More icon

ಬಡವರ ತಲೆಗೊಂದು ಸೂರುಕೊಟ್ಟ ಮೋದಿ

ನಗರಗಳಲ್ಲಿ ಅದೆಷ್ಟೋ ಲಕ್ಷ ಲಕ್ಷ ಜನ ಸಂದಿಗೊಂದಿಯಲ್ಲಿ, ಸ್ಲಮ್ ಗಳಲ್ಲಿ, ರೈಲ್ವೇ ಟ್ರಾಕ್ ಪಕ್ಕದಲ್ಲೆಲ್ಲ ಯಾವುದೋ ಅಪಾರ್ಟ್ ಮೆಂಟ್ ಕಟ್ಟಲೆಂದು ಉಪಯೋಗಿಸಿದ ಖಾಲಿ ಸಿಮೆಂಟ್ ಚೀಲದಲ್ಲಿ ಮನೆಯಂತೆ ಮಾಡಿಕೊಂಡು ಅದರಲ್ಲೇ ವಾಸ ಮಾಡಿಕೊಂಡು ಇರುವುದನ್ನು ನಾವು ಅದೆಷ್ಟೋ ಬಾರಿ ಕಂಡಿದ್ದೇವೆ. ನಾವು ಚಿಕ್ಕಂದಿನಲ್ಲಿರುವಾಗ ಆಡಲೆಂದು ಕಟ್ಟಿಕೊಳ್ಳುತ್ತಿದ್ದ ಆಟಿಕೆಯ ಮನೆಯಾದರೂ ಇನ್ನಷ್ಟು ಗಟ್ಟಿ ಹಾಗೂ ಚೆನ್ನಾಗಿರುತ್ತಿತ್ತೋ ಏನೋ. ಹೀಗೆ ಜೋರು ಮಳೆ ಮತ್ತು ಗಾಳಿ ಬಂದರೆ ತಲೆಯ ಮೇಲೆಯೇ ಬೀಳುವಷ್ಟು ದುರ್ಬಲ ಜೋಪಡಿಗಳಲ್ಲಿ ಬದುಕುತ್ತಿದ್ದ ಅದೆಷ್ಟೋ ಕೋಟಿ ಜನರಿಗೆ ಇಂದು ಮೋದಿ ಸರ್ಕಾರದ ಪ್ರಧಾನಮಂತ್ರಿ ಆವಾಸ…

Read More icon

ನಮೋ ರಾಮೋ‌ ವಿಜಯತೇ!

ಕಳೆದ ಹದಿನೈದು ದಿನಗಳಿಂದ ಫೇಸ್ಬುಕ್‌ನಲ್ಲಿ, ವಾಟ್ಸಾಪ್ ಗ್ರೂಪುಗಳಲ್ಲಿ, ಟಿವಿ ಚಾನಲ್‌ನಲ್ಲಿ ಎಲ್ಲಿ ನೋಡಿದರೂ ರಾಮನ ಗುಣಗಾನವೇ. ಮನೆಗಳ ಮೇಲೆ ಕೇಸರಿ ಬಾವುಟ, ಬೀದಿಗಳಲ್ಲಿ ರಾಮನ ಹೆಸರಿನಲ್ಲಿ ಅನ್ನದಾನ,ಮನೆಯಂಗಳದ ಮುಂದೆ ರಂಗೋಲಿ, ರಸ್ತೆಗಳು, ವಠಾರಗಳು, ಅಪಾರ್ಟ್ಮೆಂಟುಗಳು,ರಾಮನ ಅವಧಪುರಿಯನ್ನೂ ಸೇರಿದಂತೆ ಹಳ್ಳಿಹಳ್ಳಿಯ ದೇವಸ್ಥಾನಗಳು ಎಲ್ಲವೂ ರಾಮನ ಸ್ವಾಗತಕ್ಕಾಗಿ ಶೃಂಗಾರಗೊಂಡು ನಳನಳಿಸುತ್ತಿದ್ದವು. ರಾಮನೆಡೆಗಿನ ಭಾರತೀಯರ ಶ್ರದ್ಧೆ ಮತ್ತು ಭಕ್ತಿ ಊಹೆಗೂ ಮೀರಿದ್ದು. ಭಾರತ ಕಳೆಗಟ್ಟಿದ ಸಂಭ್ರಮವನ್ನು ಕಣ್ತುಂಬಿಕೊಂಡದ್ದು ನಮ್ಮ ಬದುಕಿನ ಅಮೂಲ್ಯ ಗಳಿಗೆಗಳಲ್ಲೊಂದು ಎಂದರೆ ಅತಿಶಯೋಕ್ತಿಯಲ್ಲ. ಈ ಸಂಭ್ರಮದ ಘನತೆಯ ತೂಕವನ್ನು ಮತ್ತಷ್ಟು ಹೆಚ್ಚಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ…

Read More icon

ಫ್ರಜೈಲ್ 5 ಟು ಫಾಬ್ಯುಲಸ್ 5

ಏನೇ ಹೇಳಿ… ಹಿಂದಿನ ಕಾಲವೇ ಚಂದ' ಎಂದು ಹೇಳುವ ಅನೇಕರನ್ನು ನಾವು ನೋಡಿದ್ದೇವೆ. ಬಹುಶಃ ಸಂಬಂಧ, ಭಾವನಾತ್ಮಕ ವಿಚಾರಗಳಲ್ಲಿ ಇದು ನಿಜ ಇರಬಹುದು. ಆದರೆ, ಆರ್ಥಿಕತೆಯ ವಿಚಾರಕ್ಕೆ ಬಂದಾಗ ಇದು ಅಕ್ಷರಶಃ ಸುಳ್ಳು ಎನಿಸುತ್ತದೆ. ನಮ್ಮ ಶಾಲಾ ದಿನಗಳ ಪಠ್ಯಪುಸ್ತಕದಲ್ಲಿ ಭಾರತ ಬಡ ರಾಷ್ಟ್ರ, ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದೇ ಓದುತ್ತಿದ್ದೆವು. ಕೇವಲ ಹತ್ತು ವರ್ಷಗಳ ಹಿಂದಿನ ಭಾರತದ ಪರಿಸ್ಥಿತಿ ಇದಕ್ಕಿಂತ ಭಿನ್ನವೇನು ಇರಲಿಲ್ಲ. ಜಾಗತಿಕವಾಗಿ ಭಾರತದ ಆರ್ಥಿಕತೆಯ ಸ್ಥಾನ 'Fragile Five(ದುರ್ಬಲ ಐದು)' ಪಟ್ಟಿಯಲ್ಲಿತ್ತು. ಅಂದರೆ ದೇಶದ ಆರ್ಥಿಕ ವ್ಯವಸ್ಥೆ ಯಾವುದೇ…

Read More icon

ಮೋದಿಜಿ ಕೊಟ್ಟಿದ್ದು ಪರ್ಫೆಕ್ಟ್ ಆದ ಟೆಂಪಲ್ ಇಂಡಸ್ಟ್ರಿಯನ್ನ!

ಹಿಂದೆಲ್ಲ ರಾಜಮಹಾರಾಜರು ದೊಡ್ಡ ದೊಡ್ಡ ದೇವಸ್ಥಾನಗಳನ್ನ ಕಟ್ಟುತ್ತಿದ್ದರು. ಅಜ್ಜ, ಮಗ ಮೊಮ್ಮಗ ಹೀಗೆ ತಲೆಮಾರುಗಳೇ ದೇವಾಲಯ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು. ಒಂದನೇ ಪುಲಕೇಶಿ ದೇವಾಲಯ ಕಟ್ಟಲು ಶುರು ಮಾಡಿದ, ಎರಡನೇ ಪುಲಕೇಶಿಯ ಮೊಮ್ಮಗ ಅದನ್ನು ಪೂರ್ಣಗೊಳಿಸಿದ. ೬೦ ವರ್ಷಗಳ ಕಾಲ ಆ ದೇವಾಲಯವನ್ನು ಕಟ್ಟಲಾಯಿತು. ಇಂಥ ವಿವರಗಳನ್ನು ಇತಿಹಾಸದಲ್ಲಿ ಓದಿದ್ದೇವೆ. ಹಾಗೆ ಇತಿಹಾಸ ಓದುವಾಗ ಹಿಂದಿನವರು ಅಷ್ಟೊಂದು ದೇವಸ್ಥಾನಗಳನ್ನು ಯಾಕೆ ಕಟ್ಟುತ್ತಿದ್ದರು ಎನ್ನುವ ಪ್ರಶ್ನೆ ಬರುತ್ತಿತ್ತು.‌ ದುರಾದೃಷ್ಟ ಅಂದರೆ ನಮ್ಮ ಇತಿಹಾಸಕಾರರು ಅದನ್ನು ಎಲ್ಲಿಯೂ ಸರಿಯಾಗಿ ವಿವರಿಸಲೇ ಇಲ್ಲ.ಯಾರೋ ಯುದ್ಧ ಗೆದ್ದ ನೆನಪಿಗೆ ಕಟ್ಟಿಸಿದರು,…

Read More icon

ಎಲ್ಲರೂ ವಿಮಾನ ಹತ್ತುವಂತೆ ಮಾಡಿದ ಮೋದಿಯ ‘ಉಡಾನ್’!

ಈಗೊಂದು ಹತ್ತು ವರ್ಷಗಳ ಹಿಂದಿನವರೆಗೂ ಸ್ಥಿತಿ ಹೇಗಿತ್ತೆಂದರೆ, ಆಕಾಶದಲ್ಲೆಲ್ಲೋ ವಿಮಾನದ ಶಬ್ದವಾದರೆ ಓಡಿ ಹೋಗಿ, ಮುಖ ಮೇಲೆ ಮಾಡಿ, ಕೈಯ್ಯನ್ನು ಹಣೆಗಿಟ್ಟುಕೊಂಡು, ಕಣ್ಣರಳಿಸಿ ವಿಮಾನ ನೋಡಬೇಕಿತ್ತು. ಜೊತೆಗೆ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಬೇಕಿತ್ತು. ಸಾಮಾನ್ಯರೆಲ್ಲರಿಗೂ ವಿಮಾನವನ್ನು ಪ್ರತ್ಯಕ್ಷವಾಗಿ ಕಾಣುವ ಏಕೈಕ ಸಂದರ್ಭ ಅದಾಗಿತ್ತು. ವಿಮಾನ ಹತ್ತುವುದಿರಲಿ, ಏರ್ಪೋರ್ಟ್ ಹೇಗಿರುತ್ತದೆ ಎಂದು ನೋಡುವುದಕ್ಕೂ ಹತ್ತಿರದಲ್ಲೆಲ್ಲೂ ಏರ್ಪೋರ್ಟ್ ಇರಲಿಲ್ಲ. ವಿಮಾನ ಹತ್ತಿದವನನ್ನು ಯಾವುದೋ ದೊಡ್ದ ಸಾಧನೆ ಮಾಡಿದವನ ರೀತಿಯಲ್ಲಿ ಜನ ನೋಡುವ ಒಂದು ಕಾಲವಿತ್ತು. ಸ್ವಾತಂತ್ರ್ಯ ಬಂದು ಅರವತ್ತೇಳು ವರ್ಷಗಳವರೆಗೂ ಭಾರತದಲ್ಲಿ ಇದೇ ಸ್ಥಿತಿಯಿತ್ತು. ಎಷ್ಟೇ ದೂರವಾದರೂ ಸರಿ, ಜನಸಾಮಾನ್ಯರು…

Read More icon

ರಸ್ತೆ-ರೈಲು ಮೋದಿ ಸಾಧನೆಯ ಸಾಲು

ಚಿನ್ನದ ಬದಲಿಗೆ ಚಿನ್ನದಂತಹ ರಸ್ತೆಗಳು. ಪ್ರಯಾಣ, ಪ್ರಯಾಸ ಆಗದಂತಹ ರಸ್ತೆಗಳು. ಚಲಿಸುವ ಶೌಚಾಲಯದಿಂದ ಫೈವ್ ಸ್ಟಾರ್ ಹೋಟೆಲ್ ಅನುಭವ ತರುವ ರೈಲು ಭೋಗಿಗಳು. ವಿದೇಶಿ ವಿಮಾನ ನಿಲ್ದಾಣಗಳನ್ನೂ ಮೀರಿಸುವ ರೈಲ್ವೇ ಟರ್ಮಿನಲ್ ಗಳು. ಹೀಗೂ ಮಾಡಬಹುದಾ ಎನ್ನುವಂತಹ ಸಿವಿಲ್ ಇಂಜಿನಿಯರಿಂಗ್ ತಾಂತ್ರಿಕತೆಯ ಬ್ರಿಡ್ಜ್ ಗಳು, ಟನಲ್ ಗಳು. ಇವೆಲ್ಲದರ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ದಕ್ಷ ಸಚಿವರು ಆ ದಕ್ಷ ಸಚಿವರನ್ನ ಗುರುತಿಸಿ ಸರಿಯಾದ ಜಾಗದಲ್ಲಿ ಕೂರಿಸುವುದಕ್ಕೆ ಒಬ್ಬ ಪ್ರಧಾನಿ. ದೇಶದ ಅಭಿವೃದ್ದಿಗೆ ಪ್ರಮುಖ ಪಾತ್ರವಹಿಸುವ ಭಾರತದ ನರನಾಡಿಯಾಗಿರುವ ರಸ್ತೆ, ರೈಲು ಮಾರ್ಗಗಳ ಮೂಲ ಸೌಕರ್ಯದ ಬಗ್ಗೆ…

Read More icon

ಹ್ಯಾಪಿ ಬರ್ತಡೆ ಮೋದಿಜಿ

ಆದರಣೀಯ ಮೋದಿಜಿ, ಮೊದಲನೆಯದಾಗಿ G20 ಸಮಾವೇಶದ ಮೂಲಕ ಭಾರತದ ಗೌರವವನ್ನು ವಿಶ್ವದ ವೇದಿಕೆಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದಕ್ಕೆ ಎಲ್ಲ ದೇಶವಾಸಿಗಳ ಪರವಾಗಿ ಧನ್ಯವಾದಗಳು. ಇದೇ ಸೆಪ್ಟೆಂಬರ್17 ಕ್ಕೆ ಎಪ್ಪತ್ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದೀರಿ. ಕಳೆದ ಹತ್ತು ವರ್ಷಗಳಿಂದ ವಿಶ್ರಾಂತಿಯನ್ನೇ ತೆಗೆದುಕೊಳ್ಳದೇ ದಿನಕ್ಕೆ 18 ಗಂಟೆಗಳ ಕಾಲ ನಮಗಾಗಿ ಕೆಲಸ ಮಾಡಿದ್ದೀರಿ. ಬಹುಶಃ ಇದೇ ಕಾರಣಕ್ಕಾಗಿ ಯಾವ ರಾಜಕಾರಣಿಯೂ ಕೇಳದಷ್ಟು ಬೈಗುಳಗಳನ್ನು ರಾಜಕೀಯ ವಿರೋಧಿಗಳಿಂದ ಕೇಳಿದ್ದೀರಿ ಮತ್ತು ಬೈಗುಳದ ಸಾವಿರಪಟ್ಟು ಹೆಚ್ಚು ಪ್ರೀತಿಯನ್ನು ಜನಸಾಮಾನ್ಯರಿಂದ ಪಡೆದಿದ್ದೀರಿ. ರಾಜಕೀಯದ ಗಂಧಗಾಳಿಯೂ ಕೇಳಿರದ ಮಕ್ಕಳೂ ಟಿವಿಯ ಪರದೆಯ ಮೇಲೆ ನಿಮ್ಮನ್ನು…

Read More icon
1 2