Events

Activities
favorite_border
calendar_month
08 Oct
Until 08 Oct 23h 59m

ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಹತ್ತನೇ ದಿನ

ನಿನ್ನೆ ಕಲ್ಬುರ್ಗಿಯಿಂದ ಹೊರಟು ಹಳ್ಳಿಖೇಡ ಮಾರ್ಗವಾಗಿ ಜಯಸಿಂಹನಗರಕ್ಕೆ ಬಂದೆವು. ಹಳ್ಳಿಖೇಡದಲ್ಲಿ ಜನರ ಪ್ರೀತಿಯ ಸ್ವಾಗತ. ಜಯಸಿಂಹನಗರದಲ್ಲಿ ಭರ್ಜರಿ ರ್ಯಾಲಿ. ಅಲ್ಲಿಂದ ಬಸವಕಲ್ಯಾಣದಲ್ಲಿ ಸ್ವತಃ ಶಾಸಕರೇ ಬೈಕ್ ರ್ಯಾಲಿಯಲ್ಲಿ ಜೊತೆಗೂಡಿದರು. ಶರಣರ ತಪೋಭೂಮಿಯಾದ ಈ ಸ್ಥಳದಲ್ಲಿ ಬಸವಣ್ಣನವರ ಸ್ಪರ್ಶದಿಂದ ಪುನೀತಗೊಂಡ ಪರುಷಕಟ್ಟೆಗೆ ನಮಿಸುವ ಅವಕಾಶ ನಮಗೆಲ್ಲ ಸಿಕ್ಕಿತು. ಅಲ್ಲಿಂದ ತೊಗಲೂರು ಮಾರ್ಗವಾಗಿ ರಜಾಕಾರರಿಂದ ಸಾಕಷ್ಟು ಹಿಂಸೆಗೊಳಗಾಗಿದ್ದ ಗೊರ್ಟ ಗ್ರಾಮವನ್ನು ತಲುಪಿಕೊಂಡೆವು. ಇಲ್ಲಿ ಅನೇಕ ಹಿರಿಯರು-ತರುಣರನ್ನುದ್ದೇಶಿಸಿ ಮಾತನಾಡುವ ಅವಕಾಶ ನಮಗೆ ದಕ್ಕಿತು. ಅಲ್ಲಿಂದ ಭಾಲ್ಕಿಯಲ್ಲಿ ರ್ಯಾಲಿ ಮತ್ತು ಸಂಜೆ ಬೀದರ್‌ನಲ್ಲಿ ಅಭೂತಪೂರ್ವವಾದ ಸ್ವಾಗತ, ರ್ಯಾಲಿ ಮತ್ತು ಕಾರ್ಯಕ್ರಮ. ಇಂದು ನಮ್ಮ ಪ್ರಯಾಣ ಯಾದಗಿರಿಯತ್ತ

Scan QR Code
Age Group
All