Activities
favorite_border
calendar_month
06 Oct
Until 06 Oct 23h 59m

ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಎಂಟನೇ ದಿನ

ನಿನ್ನೆ ರಾಮದುರ್ಗದಿಂದ ಆರಂಭವಾದ ಯಾತ್ರೆ ದಾರಿಯುದ್ದಕ್ಕೂ ಭವ್ಯ ಸ್ವಾಗತಗಳ ಮೂಲಕ ಬಾದಾಮಿಯನ್ನು ತಲುಪಿತು. ಅಲ್ಲಿಯೂ ನೂರಾರು ಮಂದಿಗೆ ಮೋದಿಯವರ ಅಗತ್ಯವನ್ನು ವಿವರಿಸಲಾಯ್ತು. ಅಲ್ಲಿಂದ ಕೆರೂರು, ಬಟಕುರ್ಕಿ ಮಾರ್ಗವಾಗಿ ಗಲಗಲಿಯನ್ನು ತಲುಪಿ ಸಂಜೆ ಸ್ಥಳೀಯರೊಂದಿಗೆ, ನರೇಂದ್ರಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ಅವಶ್ಯಕತೆ ಏನೆಂಬುದನ್ನು ವಿಸ್ತಾರವಾಗಿ ಚರ್ಚಿಸಲಾಯ್ತು. ಅಲ್ಲಿಂದ ಮುಂದೆ ಜನರ ಪ್ರೀತಿಯನ್ನು ಉಣ್ಣುತ್ತ ನಾವು ಸೇರಿದ್ದು ಯಕ್ಕುಂಡಿ ಎಂಬ ಗ್ರಾಮದಲ್ಲಿ. ರಾತ್ರಿ ಒಂಭತ್ತಾದರೂ ಈ ಭಾಗದ ತರುಣರು, ಉದ್ಯಮಿಗಳು, ಬರಹಗಾರರೆಲ್ಲ ಕಾಯುತ್ತ ಕುಳಿತಿದ್ದರು. ಅವರ ಅನೇಕ ಪ್ರಶ್ನೆಗಳಿಗೆ ಉತ್ತರಿಸುವಂತಹ ಕಾರ್ಯಕ್ರಮ ಸುಮಾರು ಒಂದು ಗಂಟೆಗಳ ಕಾಲ ನಡೆದು ಎಲ್ಲರೊಂದಿಗೂ ಸೇರಿ ಸಹಭೋಜನ ಮಾಡಲಾಯ್ತು.ದಿನಕ್ಕೊಂದು ಊರು, ಹೊಸ ಜನ, ಅವರ ಸಂಸ್ಕೃತಿಯೊಂದಿಗೆ ಒಂದಾಗುವ ಅವಕಾಶ. #ಜನ_ಗಣ_ಮನ_ಬೆಸೆಯೋಣ ನಿಜಕ್ಕೂ ಸಾರ್ಥಕವಾಗುತ್ತಿದೆ
Scan QR Code
Age Group
All

Comments are closed.