Activities
10 Oct
Until
10 Oct
23h 59m
ಜನ_ಗಣ_ಮನ_ಬೆಸೆಯೋಣ ಬೈಕ್ ರ್ಯಾಲಿಯ ಹನ್ನೆರಡನೇ ದಿನ
ನಿನ್ನೆ ಯಾದಗಿರಿಯಿಂದ ಹೊರಟ #ಜನ_ಗಣ_ಮನ_ಬೆಸೆಯೋಣ ಯಾತ್ರೆ ಖಾನಾಪುರದಲ್ಲಿ ಸ್ವಾಗತವನ್ನು ಸ್ವೀಕರಿಸಿ ಸುರಪುರ ಸೇರಿತು. ವೆಂಕಟಪ್ಪ ನಾಯಕನ ಅರಮನೆಯನ್ನು ಸಂದರ್ಶಿಸಿ, ತಿಂಥಣಿ ಕ್ರಾಸ್, ಗುರುಗುಂಟಾ ಮತ್ತು ಯರಡೋನಾಗಳಲ್ಲಿ ಸ್ವಾಗತವನ್ನು ಸ್ವೀಕರಿಸಿ ಲಿಂಗಸುಗೂರಿಗೆ ಬಂತು. ಅಲ್ಲಿ ನೆರೆದಿದ್ದ ತರುಣ ಮಿತ್ರರೊಂದಿಗೆ ಚರ್ಚೆ ನಡೆಸಲಾಯ್ತು. ಮಸ್ಕಿಯಲ್ಲೂ ಇದೇ ರೀತಿಯ ವಾತಾವರಣ. ನಿನ್ನೆ ಸಂಜೆ ಸಿಂಧನೂರಿನಲ್ಲಿ ಬೈಕ್ ರ್ಯಾಲಿ ಮುಗಿಸಿ ಜನರೊಂದಿಗೆ ಸಂವಾದ ನಡೆಸಲಾಯ್ತು.
ಇಂದು ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳಗಳ ಭೇಟಿ.
Scan QR Code

Age Group
All
Comments are closed.